
ಅತಿಯಾದ ಪ್ರೀತಿಯೇ ದುರಂತಕ್ಕೆ ಕಾರಣವಾಯಿತೇ?ರಾಜಾ ಆಧ್ವಿಕ್ ದೇವ್ ತನ್ನ ಮುದ್ದಾದ ಹೆಂಡತಿ ಹಾಗೂ ಪುಟ್ಟ ಮಗುವಿನೊಂದಿಗೆ ಸುಂದರ ಜೀವನ ನಡೆಸುತ್ತಿದ್ದ. ತನ್ನ ಹೆಂಡತಿಯನ್ನು ಆತ ಅಪಾರವಾಗಿ ಪ್ರೀತಿಸುತ್ತಿದ್ದ ಮತ್ತು ನಂಬಿದ್ದ ಎಂಬುದು ಆತನ ಪ್ರೊಫೈಲ್ ನೋಡಿದರೆ ತಿಳಿಯುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಆತನ ಪತ್ನಿ ಜೋಸೆಫ್ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಪತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲು ಆರಂಭಿಸಿದ್ದಳು ಎನ್ನಲಾಗಿದೆ.ಕೊನೆಗೆ ಪತ್ನಿ ತನ್ನ ಪ್ರೇಮಿ ಜೋಸೆಫ್ ಜೊತೆಗಿದ್ದಾಗ ರಾಜಾ ಆಧ್ವಿಕ್ ದೇವ್ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. ವಿಡಿಯೋದಲ್ಲಿ ಆತನೇ ಹೇಳಿಕೊಂಡಿರುವ ಪ್ರಕಾರ, ಈ ದ್ರೋಹವನ್ನು ತಡೆಯಲಾರದೆ ಆತ ತನ್ನ ಪತ್ನಿಯನ್ನೇ ಕೊಲೆ ಮಾಡಿದ್ದಾನೆ.

ಅನಾಥವಾಯ್ತು ಮುಗ್ಧ ಮಗು: ಯಾರದ್ದೋ ತಪ್ಪು, ಮತ್ಯಾರಿಗೋ ಶಿಕ್ಷೆ!ಈ ಇಡೀ ಘಟನೆಯಲ್ಲಿ ಅತ್ಯಂತ ದುಃಖದ ಸಂಗತಿಯೆಂದರೆ, ಯಾವುದೇ ತಪ್ಪು ಮಾಡದ ಒಂದು ಮುಗ್ಧ ಮಗುವಿನ ಭವಿಷ್ಯ ಈಗ ಕತ್ತಲಿಗೆ ತಳ್ಳಲ್ಪಟ್ಟಿದೆ. ತಾಯಿಯ ಸಾವಾಗಿದೆ, ತಂದೆ ಕೊಲೆ ಆರೋಪಿಯಾಗಿ ಜೈಲು ಪಾಲಾಗಿದ್ದಾನೆ. ಹೆತ್ತವರ ತಾತ್ಕಾಲಿಕ ಆಕರ್ಷಣೆ ಮತ್ತು ಆತುರದ ನಿರ್ಧಾರಗಳು ಕಣ್ಣಮುಂದೆಯೇ ಒಂದು ಮಗುವಿನ ಜೀವನವನ್ನು ಹಾದರಪಾಲಾಗಿಸಿವೆ.“ಪೋಷಕತ್ವ ಎನ್ನುವುದು ಕೇವಲ ಸಂಬಂಧವಲ್ಲ, ಅದೊಂದು ಜೀವಮಾನದ ಜವಾಬ್ದಾರಿ!” ಈ ಘಟನೆಯು ಸಮಾಜಕ್ಕೆ ದೊಡ್ಡ ಪಾಠವಾಗಿದೆ. ಗಂಡ-ಹೆಂಡತಿಯ ನಡುವಿನ ನಂಬಿಕೆ ಮುರಿದಾಗ, ಅದರ ಭೀಕರ ಪರಿಣಾಮ ಕೇವಲ ಆ ಇಬ್ಬರಿಗಷ್ಟೇ ಸೀಮಿತವಾಗಿರದೆ, ಇಡೀ ಕುಟುಂಬವನ್ನು ಸರ್ವನಾಶ ಮಾಡುತ್ತದೆ. ಅದರಲ್ಲೂ ಹೆತ್ತವರ ತಪ್ಪು ನಿರ್ಧಾರಗಳಿಂದಾಗಿ ಮುಗ್ಧ ಮಕ್ಕಳು ಜೀವನಪೂರ್ತಿ ಮಾಸದ ಗಾಯಗಳನ್ನು ಅನುಭವಿಸಬೇಕಾಗುತ್ತದೆ.ತಾತ್ಕಾಲಿಕ ಕಾಮನೆಗಳು ಮತ್ತು ಭಾವನೆಗಳಿಗೆ ಮರುಳಾಗಿ ಇಡೀ ಸಂಸಾರವನ್ನು ಬೀದಿಗೆ ತರುವ ಮುನ್ನ, ತಮ್ಮನ್ನು ನಂಬಿರುವ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಬೇಕಾದ ಅನಿವಾರ್ಯತೆಯನ್ನು ಈ ಘಟನೆ ನೆನಪಿಸುತ್ತಿದೆ.


